1539. ಜಾತಕ ಫಲ (೧೯೫೩)



ಜಾತಕ ಫಲ ಚಲನಚಿತ್ರದ ಹಾಡುಗಳು 
  1. ಜಾತಕ ಬಲವೇ ಬಲವಯ್ಯಾ 
  2. ಈ ಮೂಢತನವೇದೇಕೆ 
  3. ಯಾರೋ ರಮಣಿ ಸುಮಶರಣ  
  4. ದೇವನು ನಮ್ಮ ಹಣೆಯಲ್ಲಿ 
ಜಾತಕ ಫಲ (೧೯೫೩) - ಜಾತಕ ಬಲವೇ ಬಲವಯ್ಯಾ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಚಿ.ಸದಾಶಿವಯ್ಯ/ ಕಣಗಾಲ ಪ್ರಭಾಕರ ಶಾಸ್ತ್ರೀ ಗಾಯನ : ಪಿ.ಬಿ.ಶ್ರೀನಿವಾಸ 

ಜಾತಕ ಬಲವೇ ಬಲವಯ್ಯಾ ಗ್ರಹಗಳ ಒಲವೇ ಫಲವಯ್ಯಾ  
ಗಣಿತ ವಿಜ್ಞಾನ ವಿಲಾಸವಿದಯ್ಯಾ ಜಾಣರ ಅನುಭವ ಸತ್ಯವಿದಯ್ಯಾ 

ಮಡೆಯನ ಒಡೆತನ ಮಾಡಿಪುದಯ್ಯಾ ಮೂಢನ ಮೇಧಾವಿ ಎನ್ನಿಪುದಯ್ಯಾ 
ಬೇಡದ ಭಾಗ್ಯವ ನೀಡುವುದಯ್ಯಾ ಕಡುಗಲಿ ಪೌರುಷ ಕಲಿಸುವುದಯ್ಯಾ 
ಆಡದ ಆಟವ ಆಡಿಪುದಯ್ಯಾ ನಡೆಯದ ಕುದುರೆಯ ನಡೆಸುವುದಯ್ಯಾ 
ಜಾತಕ ಬಲವೇ ಬಲವಯ್ಯಾ ಗ್ರಹಗಳ ಒಲವೇ ಫಲವಯ್ಯಾ  
ಗಣಿತ ವಿಜ್ಞಾನ ವಿಲಾಸವಿದಯ್ಯಾ ಜಾಣರ ಅನುಭವ ಸತ್ಯವಿದಯ್ಯಾ 

ಅಡವಿಗೆ ದೂಡುತ ಅಲೆಸುವುದಯ್ಯಾ ಒಡಲುರಿ ತಾಪಡೆ ಕಾಡುವುದಯ್ಯಾ 
ಸಾಯಲು ಸಮ್ಮತಿ ಸೂಚಿಸದಯ್ಯಾ ಬಾಳಲು ಬೆಂಬಲ ತಾ ಕೊಡದಯ್ಯಾ 
ಬ್ರಹ್ಮನ ಬರಹದ ಮುನ್ನುಡಿಯಯ್ಯಾ ಭೂತ ಭವಿಷ್ಯದ ಕನ್ನಡಿಯಯ್ಯಾ 
ಜಾತಕ ಬಲವೇ ಬಲವಯ್ಯಾ ಗ್ರಹಗಳ ಒಲವೇ ಫಲವಯ್ಯಾ  
ಗಣಿತ ವಿಜ್ಞಾನ ವಿಲಾಸವಿದಯ್ಯಾ ಜಾಣರ ಅನುಭವ ಸತ್ಯವಿದಯ್ಯಾ 
---------------------------------------------------------------------------

 ಜಾತಕ ಫಲ - ಈ ಮೂಢವಿದೇಕೆ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಚಿ.ಸದಾಶಿವಯ್ಯ/ ಕಣಗಾಲ ಪ್ರಭಾಕರ ಶಾಸ್ತ್ರೀ ಗಾಯನ : ಪಿ.ಬಿ.ಶ್ರೀನಿವಾಸ 

ಮೂಢತನವಿದೇಕೆ ಈ ಮೂಢತನವಿದೇಕೆ 
ಮೂಢತನವಿದೇಕೆ ಈ ಮೂಢತನವಿದೇಕೆ 
ಈ ಮೂಢನ ನಂಬಿಕೆಗೇ ನೀ ಬಲಿಯಾಗಲೇಕೆ ಮನುಜಾ.. 
ಈ ಮೂಢನ ನಂಬಿಕೆಗೇ ನೀ ಬಲಿಯಾಗಲೇಕೆ ಮನುಜಾ.. 
ಈ ಮೂಢತನವಿದೇಕೆ ಈ ಮೂಢತನವಿದೇಕೆ 
 
ಮತಿಹೀನ ಜನರ ನುಡಿಗೇ ಮತಿಗೆಡುವೇ ಏಕೆ ಮನುಜಾ 
ಮತಿಹೀನ ಜನರ ನುಡಿಗೇ ಮತಿಗೆಡುವೇ ಏಕೆ ಮನುಜಾ.. ಆಆಆ 
ಹಿತವಿಲ್ಲದಂತೇ ನುಡಿವಾ... ಸವಿಯಿಂದ ಹಾಲಿ ಜಗದೇ... ಏಏಏ..  ಹೇಹೇಹೇ  
ಗತಿಗಾಣುವವದು ನಿಜದೀ .. ಗತಿಗಾಣರವದು ನಿಜದೀ ...    
ಹಿತವಚನ ನುಡಿಯೂ ಮನುಜ ಅತಿಯಾದ ನಂಬಿಕೆಗೆ ನೀ  ಬಲಿಯಾಗಲೇಕೆ ಮನುಜಾ.. 
ಈ ಮೂಢತನವಿದೇಕೆ ಈ ಮೂಢತನವಿದೇಕೆ 

ಹುಡುಗಾಟವೆಂದು ತಿಳಿದು ಹುಸಿಯಾಗಬೇಡ ಮನುಜ 
ಹುಡುಗಾಟವೆಂದು ತಿಳಿದು ಹುಸಿಯಾಗಬೇಡ ಮನುಜ... ಆಆಆ 
ಹುಡುಗಾಟವದುವೇ ನಿಜದಿ ದೊಡ್ಡಾಟವೆನಿಸಬಹುದು..... 
ಶಕೆಗಿಂದ ಬಹುದು ಕೇಡು ಶಕೆಯಿಂದ ಬಹುದು ಕೇಡು 
ದಿಟವನ್ನು ನುಡಿಯೋ ಮನುಜ ಈ ಮೂಢನಂಬಿಕೆಗೇ ನೀ  ಬಲಿಯಾಗಲೇಕೆ ಮನುಜಾ.. 
ಈ ಮೂಢತನವಿದೇಕೆ ಈ ಮೂಢತನವಿದೇಕೆ   
--------------------------------------------------------------------------

ಜಾತಕ ಫಲ (೧೯೫೩) - ಯಾರೋ ರಮಣಿ ಸುಮಶರಣ  
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ನಾಗೇಂದ್ರರಾವ್  ಗಾಯನ : ವಸಂತಕುಮಾರಿ 


--------------------------------------------------------------------------
ಜಾತಕ ಫಲ (೧೯೫೩) - ದೇವನು ನಮ್ಮ ಹಣೆಯಲ್ಲಿ 
ಸಂಗೀತ : ಆರ್. ಗೋವರ್ಧನ, ಸಾಹಿತ್ಯ : ನಾಗೇಂದ್ರರಾವ್  ಗಾಯನ : ಜಿ. ಕೆ. ವೆಂಕಟೇಶ, 

ಗಂಡು : ದೇವನು ನಮ್ಮ ಹಣೆಯಲ್ಲಿ ಬರೆದಿಹ ಬಾಳೆ 
            ಸಾಕು ಬೇಡವೇ ಬೇಡ ಅತೀ ಆಸೆಯು ಬೇಡ 
            ದೇವನು ನಮ್ಮ ಹಣೆಯಲ್ಲಿ ಬರೆದಿಹ ಬಾಳೆ 
             ಸಾಕು ಬೇಡವೇ ಬೇಡ ಅತೀ ಆಸೆಯು ಬೇಡ 
ಹೆಣ್ಣು : ಅವನು ಬರೆದ ಬಾಳಿಗೂ ಆಸೆಗೂ ಬಹು ದೂರ 
            ಆಸೆ ಅರಿಯವಿಲ್ಲದ ಬಾಳದು ನಿಸ್ಸಾರ
            ಅವನು ಬರೆದ ಬಾಳಿಗೂ ಆಸೆಗೂ ಬಹು ದೂರ 
            ಆಸೆ ಅರಿಯವಿಲ್ಲದ ಬಾಳದು ನಿಸ್ಸಾರ
ಗಂಡು : ಛೇ.. ಛೇ.. ಯಾಕೇ ಏನೇ ಕಡಿಮೆ ನಿನಗೆ 
ಹೆಣ್ಣು : ಹೌದೌದು ತುಂಬಾ ನೀ ಕೊಟ್ಟಿರೋದು ನನಗೆ 
ಗಂಡು :ಆಸ್ತಿ ಅಧಿಕವಿದ್ದರೇ ಬರದು ಸುಖದ ನಿದ್ದಿರೇ..
           ಆಸ್ತಿ ಅಧಿಕವಿದ್ದರೇ ಬರದು ಸುಖದ ನಿದ್ದಿರೇ..
           ಆಸೆಗೆ ಮಿತಿ ಇಲ್ಲ ಹಣದಾಸೆಗೆ ಮಿತಿ ಇಲ್ಲ 
           ಅದರಿಂದ ಬರುವ ಭಯವು ನಮಗೇ 
           ಬೇಡವೇ ಬೇಡವೇ ಬೇಡವೇ 
          ದೇವನು ನಮ್ಮ ಹಣೆಯಲ್ಲಿ ಬರೆದಿಹ ಬಾಳೆ ಸಾಕು 
          ಬೇಡವೇ ಬೇಡ ಅತೀ ಆಸೆಯು ಬೇಡ 

ಹೆಣ್ಣು :ಹಣವಿರುವನೇ ದೇವವೆಂದು ಮಣಿವುದು ಈ ಜಗವು
           ಹಣವಿರುವನೇ ದೇವವೆಂದು ಮಣಿವುದು ಈ ಜಗವು
           ಹಣದ ಮಹಿಮೆಯು ತಿಳಿದರೆ ಬದಲು ಮಾತನಾಡೇ             ನಿಜವೂ ಬೇಡವೋ ಬೇಡವೋ ಬೇಡವೋ ಬಡತನ 
           ಬೇಡವೋ ಬೇಡವೋ ಬೇಡವೋ
ಗಂಡು :ಸಿರಿವಂತನು ತಾ ಪಡುವ ತೊಂದರೆ ನೀನೇನೆ ಬಲ್ಲೇ 
           ಸಿರಿವಂತನು ತಾ ಪಡುವ ತೊಂದರೆ ನೀನೇನೆ ಬಲ್ಲೇ
           ತೆರಿಗೆಯನು ತೆರಲಾರದೇ ಪಾಡು ಪಡುವನಲ್ಲೇ 
           ತೆರಿಗೆಯನು ತೆರಲಾರದೇ ಪಾಡು ಪಡುವನಲ್ಲೇ 
          ತರದಿರೆ ತನ್ನಯ ಧನವ ಬಹು ಲೋಭೀ ಎನ್ನುವರಲ್ಲೇ
          ತರದಿರೆ ತನ್ನಯ ಧನವ ಇವ ಲೋಭೀ ಎನ್ನುವರಲ್ಲೇ
     ಬರಿದೆ ದೂರುವರನ ಪರಿಪರಿಯಲ್ಲಿ ಕರುಬುವ ಜನರೆಲ್ಲ
     ಬರಿದೆ ದೂರುವರನ ಪರಿಪರಿಯಲ್ಲಿ ಕರುಬುವ ಜನರೆಲ್ಲ

ಹೆಣ್ಣು : ದುಡ್ಡಿದವನೇ ದೊಡ್ಡವನೆಂದು ಜಗ ಹೇಳುವುದಲ್ಲ 
            ದುಡ್ಡಿದವನೇ ದೊಡ್ಡವನೆಂದು ಜಗ ಹೇಳುವುದಲ್ಲ 
            ದುಡ್ಡೋ ಒಂದಿದ್ದರೆ ದೊಡ್ಡ ಕಾರ್ಯಗಳ ಸಾಧಿಸಬಹುದಲ್ಲ 
            ದುಡ್ಡೋ ಒಂದಿದ್ದರೆ ದೊಡ್ಡ ಕಾರ್ಯಗಳ ಸಾಧಿಸಬಹುದಲ್ಲ
            ದುಡ್ಡಿಲ್ಲದ ಮನುಜನ್ನ ಬಲು ದಡ್ಡನು ಎನ್ನುವರಲ್ಲ 
ದುಡ್ಡಿಲ್ಲದ ಮನುಜನ್ನ ಬಲು ದಡ್ಡನು ಎನ್ನುವರಲ್ಲ 
            ದೊಡ್ಡ ಹೆಡ್ಡನಾದರೂ ದುಡ್ಡಿನಿಂದಲೇ ಮಾನ್ಯತೆ ಪಡೆವನಲ್ಲ 
            ದೊಡ್ಡ ಹೆಡ್ಡನಾದರೂ ದುಡ್ಡಿನಿಂದಲೇ ಮಾನ್ಯತೆ ಪಡೆವನಲ್ಲ 
             ಬೇಡವೋ ಬೇಡವೋ ಬೇಡವೋ ಬಡತನ 
             ಬೇಡವೋ ಬೇಡವೋ ಬೇಡವೋ
--------------------------------------------------------------------------

No comments:

Post a Comment