786. ಐಶ್ವರ್ಯ (2006)


ಐಶ್ವರ್ಯ ಚಲನಚಿತ್ರದ ಹಾಡುಗಳು 
  1. ಐಶ್ವರ್ಯ.. ಐಶ್ವರ್ಯ ನೀ ನನ್ನ ಉಸಿರು ಕಣೆ!
  2. ಹುಡುಗಿ ಹುಡುಗಿ ನಿನ್ನ ಕಂಡಾಗ
  3. ಕಡಮಡವಿದು ಏನಿದು?
  4. ಓಳು ಓಳು ಬರಿ ಓಳು ಒಳು.
  5. ದೋಣಿ ದೋಣಿ 
ಐಶ್ವರ್ಯ (2006) - ಐಶ್ವರ್ಯ.. ಐಶ್ವರ್ಯ ನೀ ನನ್ನ ಉಸಿರು ಕಣೆ!
ಸಂಗೀತ: ರಾಜೇಶ್ ರಾಮನಾಥ,  ಸಾಹಿತ್ಯ: ಕೆ.ಕಲ್ಯಾಣ, ಗಾಯನ: ಕುನಾಲ್ ಗಾಂಜವಾಲ

ಐಶ್ವರ್ಯ.. ಐಶ್ವರ್ಯ ನೀ ನನ್ನ ಉಸಿರು ಕಣೆ!
ನಿನ್ನಲ್ಲು ನನ್ನಲ್ಲು ಈ ಪ್ರೀತಿ ಒಂದೆ ಕಣೇ!
ಹೇಳು.. ನಿನಗಾಗಿ ನಾನಿಲ್ಲವೇನು
ಪ್ರೀತಿನೆ ಉಸಿರಲ್ಲವೇನು ನೀನು, ನಾನು!

ನಾನೊಂದು ಬಂಜರ ನೀನಲ್ಲಿ ಇಂಚರ
ನೀ ಹಾಡಿದಾಗಲೆ ನಮ ಪ್ರೀತಿ ಸುಂದರ 
ಬಾ ನನ್ನ ಹತ್ತಿರ  ಬೇಕಿಲ್ಲ ಅಂತರ
ನಾವೊಂದೆ ಆದರೆ  ಸುಖವೇ ನಿರಂತರ
ಈ ಪ್ರೀತಿ ಎಂದು ನಿನಗಾಗಿ
ಕಾಯುತಿದೆ ಗಿಳಿಯಾಗಿ
ನಿನ್ನೆದೆಯ ಮಾತು ತಿಳಿಸು
ಮನಸಾರೆ ಹಿತವಾಗಿ
ಐಶ್ವರ್ಯ.. ಐಶ್ವರ್ಯ  ನೀ ನನ್ನ ಉಸಿರು ಕಣೆ!
ನಿನ್ನಲ್ಲು ನನ್ನಲ್ಲು  ಈ ಪ್ರೀತಿ ಒಂದೆ ಕಣೇ!
ಹೇಳು.. ನಿನಗಾಗಿ ನಾನಿಲ್ಲವೇನು
ಪ್ರೀತಿನೆ ಉಸಿರಲ್ಲವೇನು ನೀನು, ನಾನು!

ನೀ ಸ್ವರಗಳಾದರೆ  ನಾ ಕವಿತೆ ಯಾಗುವೆ
ನೀ ಕಾಣದಾದರೆ  ಕಲ್ಲಾಗಿ ಹೋಗುವೆ
ನೀ ಅಪ್ಪಿಕೊಳ್ಳದೆ  ಎದೆ ಬಡಿತ ಎಲ್ಲಿದೆ?
ನೀನೆಲ್ಲೆ ಹೋದರು ನನುಸಿರು ಅಲ್ಲಿದೆ
ನಿಜವಾಗಿ ಹೇಳು ಎಲ್ಲಿರುವೆ?
ನನ ಬಿಟ್ಟು ಹೇಗಿರುವೆ?
ಈ ಪ್ರಾಣ ಹೋದರು ಸರಿಯೇ
ನಿನಗಾಗಿ ಕಾದಿರುವೆ!
ಐಶ್ವರ್ಯ.. ಐಶ್ವರ್ಯ  ನೀ ನನ್ನ ಉಸಿರು ಕಣೆ!
ನಿನ್ನಲ್ಲು ನನ್ನಲ್ಲು  ಈ ಪ್ರೀತಿ ಒಂದೆ ಕಣೆ!
ಹೇಳು.. ನಿನಗಾಗಿ ನಾನಿಲ್ಲವೇನು
ಪ್ರೀತಿನೆ ಉಸಿರಲ್ಲವೇನು  ನೀನು, ನಾನು!
------------------------------------------------------------------------------------------------------------------------

ಐಶ್ವರ್ಯ (2006) - ಹುಡುಗಿ ಹುಡುಗಿ ನಿನ್ನ ಕಂಡಾಗ
ಸಂಗೀತ: ರಾಜೇಶ್ ರಾಮನಾಥ,  ಸಾಹಿತ್ಯ: ಕೆ.ಕಲ್ಯಾಣ, ಗಾಯನ: ಕುನಾಲ್ ಗಾಂಜವಾಲ

ಹುಡುಗಿ ಹುಡುಗಿ ನಿನ್ನ ಕಂಡಾಗ ನನ್ನೇ ಮರೆತೆ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ ನಾನೆ ಇಲ್ಲ ನನಗೀಗ!
ನೀನು ಬಳುಕಿ ನಡೆಯ್ವಾಗ ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ..  ಪ್ರೀತ್ಸೆ!

ತುಟಿಯಲ್ಲಿ ಈ ಸ್ಮೈಲು ಕಂಡಾ ಕೂಡಲೆ
ಎದೆಯಲ್ಲಿ ಪ್ರೀತಿಯ ಚಿಲುಮೆ ಚಿಮ್ಮಿತು
ಕಣ್ಣಲಿ ಸಿಹಿ ಲುಕ್ಕು ಕೊಟ್ಟ ಕೂಡಲೆ
ಮನಸೆಲ್ಲೊ ಗರಿ ಬಿಚ್ಚಿ ಹಾರಿ ಹೋಯಿತು
ನೀ ನಡೆಯೊ ದಾರಿಯಲ್ಲ ಹದಿನೇಳು ಚೈತ್ರವಾಯ್ತು
ನೀ ಹಾಡೋ ಹಾಡಿನಿಂದ ಕವಿಗಳಿಗೆ ಉಸಿರು ಬಂತು
ನಿನ್ನ ಮೌನ ನೋಡಿ ತಾನೆ ಗಾಳಿ ಹಾಡ ಹಾಡಿತು
ನಿನ್ನ ಮಾತು ಕೇಳಿ ತಾನೆ ಕೋಗಿಲೆ ಕೂಹು ಕರಿಯಿತು
ಪ್ರೀತಿನ ಪ್ರೀತಿ ಇಂದ ಪ್ರೀತಿ ಮಾಡುವೆ.. ಪ್ರೀತ್ಸೆ!
ಹುಡುಗಿ ಹುಡುಗಿ ನಿನ್ನ ಕಂಡಾಗ ನನ್ನೇ ಮರೆತೆ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ ನಾನೆ ಇಲ್ಲ ನನಗೀಗ!

ಗಾಳೀಲಿ ನಿನ್ನ ಹೆಸರ ಕರೆದ ಕೂಡಲೆ
ಹೂವುಗಳು ಮೈನೆರೆದ ಕಥೆಯು ಹುಟ್ಟಿತೆ
ಮಳೆಯೊಳಗೆ ನಿನ್ನ ಹಾಡು ನೆನೆದ ಕೂಡಲೆ
ಚಿಪ್ಪೊಳಗೆ ಮುತ್ತುಗಳ ಹೋಳಪು ಹುಟ್ಟಿತೆ
ನೀ ಸೊಕೊ ನೆಲೆದಲೆಲ್ಲ ಚಿರುಗಳ ಹಬ್ಬವಂತೆ
ನೀ ತಾಕೊ ಕಡೆಯಲೆಲ್ಲ ಇಬ್ಬನಿಯ ದಿಬ್ಬವಂತೆ
ನಿನ್ನ ಮೋನಾಲಿಸ ನಗೆಯ ನಾ ಕಲಿಯೊ ಸಲುವಾಗಿ
ಪ್ರೀತಿ ತುಂಬಿಕೊಂಡ ಎದೆಯ ನಾ ಸೇರೊ ಕ್ಷಣಗಾಗಿ
ಮನಸಾರೆ ಸೋತು ಬಂದೆ ಒಮ್ಮೆ ಒಪ್ಪಿಕೊ.. ಪ್ರೀತ್ಸೆ!
ಹುಡುಗಿ ಹುಡುಗಿ ನಿನ್ನ ಕಂಡಾಗ ನನ್ನೇ ಮರೆತೆ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ ನಾನೆ ಇಲ್ಲ ನನಗೀಗ!
ನೀನು ಬಳುಕಿ ನಡೆಯ್ವಾಗ ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ..  ಪ್ರೀತ್ಸೆ!
--------------------------------------------------------------------------------------------------------------------------

ಐಶ್ವರ್ಯ (2006) - ಕಡಮಡವಿದು ಏನಿದು?
ಸಂಗೀತ: ರಾಜೇಶ್ ರಾಮನಾಥ,  ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ, ಗಾಯನ: ಅನುಷ್ಕ

ಕಡಮಡವಿದು ಏನಿದು? ಕಡವಡವಿದು ನಿಲ್ಲದು
ಇದ ತಿಳಿಸಲು ಆಗದು ಪ್ರೇಮಾ ನಾ?
ಹದಿಹರೆಯದ ವಯಸಿದು ಎಳೆಮನಸಿನ ಕನಸಿದು
ಯಾರದು?  ನೀನೆ ನಾ? 
ಎಲ್ಲೆಲ್ಲು ನೀನೆ ನೀನೆ..  ನನಲ್ಲು ನೀನೆ ತಾನೆ..
ಅಣುವಣುವಲು ನಿಂದೆ ಉತ್ಸವ
ಮನ್ಮಥ ನಿನೆನಾ?  ನೀನೇನಾ... , ನೀನೇನಾ... ನೀನೇನಾ... 

ನಿನ್ನ ಒಂದು ಸ್ಪರ್ಶದಿಂದ ನೀ ತಂದ ಹರ್ಶದಿಂದ
ಹದಿನಾರರ ಬೇಲಿ ದಾಟಿದೆ ನಿನ್ನ ಒಂದು ನೋಟದಿಂದ
ಕಣ್ಣಂಚ್ಚಿನ ಸನ್ನೆ ಇಂದ ಮೈ-ಮನಸು ತೇಲಿ ಹೋಗಿದೆ
ಮುಂಜಾನೆ ಮಂಜಿಗಿಂತ ತಂಪು ನಾನು
ರವಿಎಂತೆ ನನ್ನ ಮುಟ್ಟಿ ಬಿಟ್ಟೆ ನೀನು
ಇಂದೆಂದು.. ನೀ ತಂದೆ.. ಉಲ್ಲಾಸ.. ಉತ್ಸಾಹ
ಎಲ್ಲಿಂದ ಬಂದೆ ಹೇಳು ನೀನು ಮನ್ಮಥ..
ಮನ್ಮಥ ನಿನೆನಾ? ನೀನೇನಾ.... ನೀನೇನಾ.... ನೀನೇನಾ.... 

ಮನಸೊಂದು ನೀಲಿ ಬಾನು ನೀನಿರದೆ ಖಾಲಿ ನಾನು
ಸೂರ್ಯಾನೆ ನೀನೆ ಅಲ್ಲವೆ? ಮನದಾಸೆ ಹೇಳುವಾಸೆ
ನಿನ್ನೋಡನೆ ಬಾಳುವಾಸೆ ಮೊದಮೊದಲ ಪ್ರೀತಿ ಅಲ್ಲವೆ?
ಮುಸ್ಸಂಜೆ ಬಾನು ಕೆಂಪು ರಂಗು ನಾನು
ಬಾನಾಡಿಯಾಗಿ ಬಂದು ಸೇರು ನೀನು
ನಿನ್ನಿಂದ.. ಸಂತೋಶ.. ಸಲ್ಲಾಪ.. ಸಮ್ಮೇಳ
ಎಲ್ಲಿಂದ ಬಂದೆ ಹೇಳು ನೀನು ಮನ್ಮಥ..
ಮನ್ಮಥ ನಿನೆನಾ?  ನೀನೇನಾ.... ನೀನೇನಾ.... ನೀನೇನಾ.... 
ಕಡಮಡವಿದು ಏನಿದು? ಕಡವಡವಿದು ನಿಲ್ಲದು
ಇದ ತಿಳಿಸಲು ಆಗದು ಪ್ರೇಮಾ ನಾ?
ಹದಿಹರೆಯದ ವಯಸಿದು ಎಳೆಮನಸಿನ ಕನಸಿದು
ಯಾರದು?  ನೀನೇನಾ.... ನೀನೇನಾ.... 
ಎಲ್ಲೆಲ್ಲು ನೀನೆ ನೀನೆ.. ನನಲ್ಲು ನೀನೆ ತಾನೆ..
ಅಣುವಣುವಲು ನಿಂದೆ ಉತ್ಸವ
ಮನ್ಮಥ ನೀನೇನಾ.... ನೀನೇನಾ.... ನೀನೇನಾ.... 
-------------------------------------------------------------------------------------------------------------------------

ಐಶ್ವರ್ಯ (2006) - ಓಳು ಓಳು ಬರಿ ಓಳು ಒಳು.
ಸಂಗೀತ: ರಾಜೇಶ್ ರಾಮನಾಥ,  ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ, ಗಾಯನ: ಉಪೇಂದ್ರ


ಓಳು ಓಳು ಬರಿ ಓಳು ಒಳು...   ಓಳು ಓಳು ಬರಿ ಓಳು ಒಳು...
ಎಲ್ಲಾ ಓಕೆ ಮದುವೆ ಯಾಕೆ.... ಎಲ್ಲಾ ಓಕೆ ಮದುವೆ ಯಾಕೆ....
ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ..
ಏಳು ಹೆಜ್ಜೆ ನಡೆದ ಮೇಲೆ ಏಳು ಜನ್ಮ ಶಿಕ್ಷೆ..
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಗಂಡನ ಜುಟ್ಟು ಹೆಂಡತಿ ಕೈಲಿ.. ಯಾಕೆ ಎ ಎ ಎ..
ಎಲ್ಲ ಓಕೆ ಎ... ಮದುವೆ ಯಾಕೆ ಎ...

ವಾಲೇ ಜುಮ್ ಕಿ ಕೊಂಡುಕೊಂಡ್ರೆ ಎದುರು ಮನೆಯ ಲೇಡಿ..
ನಕ್‌ಲಸೆ ಬೇಕು ಅಂತ ಇವಳು ಧರಣಿ ಮಾಡ್ಟಾಲ್ ನೋಡಿ...
ಫ್ರೀಯಾಗಿದ್ರೆ ಫಾಷನ್ ಟಿವಿ ನೋಡೋದೇನೇ ಚೆಂದ...
ಚಾನಲ್ ಚೇಂಜು ಮಾಡಿ ನನ್ನ ನೋಡ್ತಾಲ್ ವಾರ್ಗನ್ಣಿoದ...

ಗುಡಿಯ ಒಳಗೆ ಪಡೆದ ಹೂವು ಜೇಬಲ್ಲಿದ್ರೆ ಪೆದ್ದಾ...
ಯಾವೊಳನ್ನ ತಬ್ಗೊಂಡಿದ್ರಿ ಅಂತ ಹೆಂಡ್ತಿ ಯುದ್ಧಾ..
ಸೆಲ್ ಫೋನಲ್ಲಿ ಗರ್ಲ್‌ಫ್ರೆಂಡ್ ಕಳ್ಸಿದ್ಡ್ ಎಸ್ಸೆಮ್ಮೆಸ್ಸು ಇದ್ರೆ...
ಯಾವೊಲವ್ಲೂ ಸವತಿ ಅಂತ ಹೆಂಡ್ತಿ ಹತ್ರ ತೋ o ದ್ರೆ...

ಹೆಂಡತಿ ಜೊತೆಯಲ್ಲಿ... ಹೋದ್ರೆ ರೊಡಲ್ಲಿ...
ರಸಿಕ ಆದರೂ ನೀನು ಕುರುಡನ ಹಾಗೆ ಇರು..
ಹೆಂಡತಿ ಒಬ್ಬಳು... ಹೆಂಡತಿ ಒಬ್ಬಳು...
ಹೆಂಡತಿಯೊಬ್ಬಳು ಮನೆಯೋಳಗಿದ್ದರೆ ನನಗದು ಕೋಟಿ ರೂಪಾಯಿ..
ಹೆಂಡತಿಯೊಬ್ಬಳು ಮನೆಯೋಳಗಿದ್ದರೆ ನನಗದು ಕೋಟಿ ರೂಪಾಯಿ..
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ....
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ.... ನಾನೂ ಒಬ್ಬ ಸಿಪಾಯಿ....

ಎಲ್ಲಾ ಓಕೆ ಮದುವೆ ಯಾಕೆ.... ಎಲ್ಲಾ ಓಕೆ ಮದುವೆ ಯಾಕೆ....
ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ..
ಏಳು ಹೆಜ್ಜೆ ನಡೆದ ಮೇಲೆ ಏಳು ಜನ್ಮ ಶಿಕ್ಷೆ..

ಆಫೀಸಿಂದಾ ಮನೆಗೆ ಬಂದ್ರೆ ಕಾಫಿ ಕೊಡುವ ಬದಲು...
ಯಾವೋಳಿಂದೇ ಸುತ್ತಾ ಇದ್ರಿ ಯಾಕ್ರಿ ಲೇಟು ಅಂದ್ಲು...
ಬ್ರಹ್ಮಚಾರಿ ಜೀವನದಲ್ಲಿ ನಾಲ್ಕೇ ಬಟ್ಟೆ ಸಾಕು...
ಮದುವೆ ಆದ್ರೆ ವಾರಕ್ಕೊಂದು ಸೀರೆ ಕೊಡಿಸಬೇಕು...
ತಬ್ಬಿಕೊಳ್ಳೋ ನೇಪಲ್ಲೇನೇ ಮೂಸಿ ನೋಡುತ್ತಾಳೆ..
ಅಪ್ಪಿ ತಪ್ಪಿ ಬೇರೆ ಸೆಂಟು ಸಿಕ್ಕ್ರೆ ಬಾರುಸ್ತಾಳೆ...
ಮದುವೆಗ್ ಮುಂಚೆ ಕರ್ಚು ಕಮ್ಮಿ ಲೈಫೇ ಜಾಲಿಜಾಲಿ..
ಮದುವೆ ಆದ್ರೆ ಶಾಪಿಂಗ್ ಅಂತ ಜೇಬು ಕಾಲಿ ಕಾಲೀ.....

ಹೆಂಡತಿಯೊಂದಿಗೆ... ಹೆಂಡತಿಯೊಂದಿಗೆ... ಹೆಂಡತಿಯೊಂದಿಗೆ ಸಿರಿತನ ಬಡತನ ಏನೂ ಬಯವಿಲ್ಲಾ...
ಹೆಂಡತಿಯೊಂದಿಗೆ ಸಿರಿತನ ಬಡತನ ಏನೂ ಬಯವಿಲ್ಲಾ...
ಹೆಂಡತೀಯೋಲುಮೆಯ ಭಾಗ್ಯವನರಿಯದೇ ಗಂಡಿಗೆ ಜಯವಿಲ್ಲ...
ಹೆಂಡತೀಯೋಲುಮೆಯ ಭಾಗ್ಯವನರಿಯದೇ ಗಂಡಿಗೆ ಜಯವಿಲ್ಲ... ಗಂಡಿಗೆ ಜಯವಿಲ್ಲ...
ಹೇ ಎಲ್ಲಾ ಓಕೆ ಮದುವೆ ಯಾಕೆ..
ಎಲ್ಲಾ ಓಕೆ ಮದುವೆ ಯಾಕೆ ಯಾಕೆ...
ಎಲ್ಲಾ ಓಕೆ ಮದುವೆ ಯಾಕೆ.... ಎಲ್ಲಾ ಓಕೆ ಮದುವೆ ಯಾಕೆ....
ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ..
ಏಳು ಹೆಜ್ಜೆ ನಡೆದ ಮೇಲೆ ಏಳು ಜನ್ಮ ಶಿಕ್ಷೆ..
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಗಂಡನ ಜುಟ್ಟು ಹೆಂಡತಿ ಕೈಲಿ.. ಯಾಕೆ ಎ ಎ ಎ..
ಎಲ್ಲಾ ಓಕೆ ಮದುವೆ ಯಾಕೆ...
ಎಲ್ಲ ಓಕೆ ಮದುವೆ ಯಾಕೆ....
----------------------------------------------------------------------------------------------------------

ಐಶ್ವರ್ಯ (2006) - ದೋಣಿ ದೋಣಿ 
ಸಂಗೀತ: ರಾಜೇಶ್ ರಾಮನಾಥ,  ಸಾಹಿತ್ಯ: 
ಉಪೇಂದ್ರ, ಗಾಯನ: ಕಾರ್ತಿಕ  


----------------------------------------------------------------------------------------------------------

No comments:

Post a Comment